ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳ ಸ್ಥಗಿತ ಯಾಕೆ..!! ಸಚಿವ ದಿನೇಶ್‌ ಗುಂಡೂರಾವ್ ಸ್ಪಷ್ಟನೆ..


Janoushadi Kendragala Sthagita

ಬೆಂಗಳೂರು, ಮೇ 23, 2025:
ರಾಜ್ಯ ಸರ್ಕಾರ ಜನೌಷಧಿ ಯೋಜನೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಕೇವಲ 180 ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳ ಬಗ್ಗೆ ಚರ್ಚೆ ನಡೆಯುತ್ತಿದೆ, ಉಳಿದ 1220 ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

janoushadi kendragala sthagita karana dinesh gundu rao clarification
janoushadi kendragala sthagita karana dinesh gundu rao clarification

🔹 ಆಸ್ಪತ್ರೆಗಳಲ್ಲಿ ಔಷಧ ಮಾರಾಟದ ಅಗತ್ಯವಿಲ್ಲ:
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಲಭ್ಯವಿರುವುದರಿಂದ, ಅಲ್ಲಿ ಔಷಧ ಮಾರಾಟ ಮಾಡುವ ಮೆಡಿಕಲ್ ಶಾಪ್‌ಗಳ ಅವಶ್ಯಕತೆಯಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಈ ನಿರ್ಧಾರದಿಂದ ಬಡ ರೋಗಿಗಳಿಗೆ ತೊಂದರೆ ಆಗದಂತೆ ಎಲ್ಲಾ ಸೌಲಭ್ಯಗಳನ್ನ ಆಸ್ಪತ್ರೆಗಳಲ್ಲಿ ನೇರವಾಗಿ ನೀಡಲಾಗುವುದು.

🔹 ಬ್ರಾಂಡೆಡ್ ಔಷಧಿಗಳ ಮಾರಾಟದ ಕುರಿತು ತನಿಖೆ:
ಜನೌಷಧಿ ಕೇಂದ್ರಗಳಲ್ಲಿ ಕೇವಲ ಜನರಿಕ್ ಔಷಧಿಗಳನ್ನ ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮವಿದೆ. ಆದರೆ ಕೆಲವು ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧಿಗಳ ಮಾರಾಟದ ಬಗ್ಗೆ ಮಾಹಿತಿ ದೊರೆತಿದ್ದು, ಈ ಬಗ್ಗೆ ಔಷಧ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸುತ್ತಿದೆ.

🔹 ಹೊಸ ಪ್ರಸ್ತಾವನೆಗಳಿಗೆ ತಡೆ:
ಇತ್ತೀಚೆಗೆ ಬಂದ 31 ಹೊಸ ಜನೌಷಧಿ ಕೇಂದ್ರಗಳ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಿರಸ್ಕರಿಸಲಾಗಿದೆ. ಕೇಂದ್ರಗಳನ್ನು ಸ್ಥಗಿತಗೊಳಿಸುವ ಮುನ್ನ ಒಪ್ಪಂದಗಳ ಪರಿಶೀಲನೆ, ಅವಧಿ ಮುಗಿದಿರುವದೆಯೇ ಎಂಬುದರ ಪರಿಶೀಲನೆ ಮುಗಿಸಿ ಕ್ರಮ ಕೈಗೊಳ್ಳಲಾಗುವುದು.

🔹 ರಾಜಕೀಯ ಬೇರೆಸಬಾರದು:
ಜನೌಷಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ ಈ ನಿರ್ಧಾರದಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸಾರ್ವಜನಿಕರ ಹಿತಕ್ಕಾಗಿ ಮತ್ತು ಸರ್ಕಾರದ ಉಚಿತ ಔಷಧ ವಿತರಣೆಯ ನಿಷ್ಠೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

🔹 ಔಷಧಿಗಳ ಕೊರತೆ ಇಲ್ಲ:
ಸರ್ಕಾರಿ ಔಷಧಿ ಕೇಂದ್ರಗಳಲ್ಲಿ ಔಷಧಿಗಳ ಕೊರತೆ ಇಲ್ಲ. ಕೆಲವು ಕಡಿಮೆ ಬೇಡಿಕೆಯ ಔಷಧಿಗಳಿಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಖರೀದಿ ಮಾಡಬಹುದಾದ ವ್ಯವಸ್ಥೆ ಮಾಡಲಾಗಿದೆ.

Sharath Kumar M

Leave a Reply

Your email address will not be published. Required fields are marked *

rtgh