‘ಫಸಲ್ ಭೀಮಾ ವಿಮಾ ಯೋಜನೆ’ಗೆ ಅರ್ಜಿ ಆಹ್ವಾನ – ಕೊನೆಯ ದಿನಾಂಕ ಯಾವುದು.? ಸಂಪೂರ್ಣ ಮಾಹಿತಿ


Spread the love

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಮಾಹಿತಿ ನೀಡಿರುವಂತೆ, 2024-25 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ರಾಜ್ಯದ ಎಂಟು ತಾಲ್ಲೂಕಿನ 14 ಹೋಬಳಿಗಳಲ್ಲಿ ಅನುಷ್ಟಾನಗೊಳ್ಳಲಿದೆ. ಈ ಯೋಜನೆಯಡಿ ರೈತರು ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಲಿದ್ದಾರೆ.

Application Invitation for 'Fasal Bhima Insurance Scheme'
Application Invitation for ‘Fasal Bhima Insurance Scheme’

ಈ ಯೋಜನೆಯಡಿ ಧಾರವಾಡ ಜಿಲ್ಲೆಯ 11 ಬೆಳೆಗಳು ಯೋಜನೆಯ ವ್ಯಾಪ್ತಿಗೆ ಒಳಪಡಿದ್ದು, ಅವುಗಳಲ್ಲಿ ಹುರುಳಿ, ಕುಸುಮೆ, ಹೆಸರು ಬಾಧಿತ ಬೆಳೆಗಳಾಗಿದ್ದು, ಮಳೆ ಆಶ್ರಿತ ಬೆಳೆಗಳಾಗಿವೆ. ಜೋಳ ಮತ್ತು ಮುಸಿಕಿನ ಜೋಳ ಬೆಳೆಗಳು ನೀರಾವರಿ ಆಶ್ರಿತವಾಗಿವೆ. ಇನ್ನು ಗೋಧಿ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಗಳು ನೀರಾವರಿ ಮತ್ತು ಮಳೆ ಆಶ್ರಿತ ಎರಡೂ ಆಧಾರಗಳಿವೆ.

ಅರ್ಜಿಯನ್ನು ಸಲ್ಲಿಸಲು ಅಗತ್ಯ ದಿನಾಂಕಗಳು:

  • ಜೋಳ, ಕಡಲೆ, ಹುರುಳಿ, ಕುಸುಮೆ, ಸೂರ್ಯಕಾಂತಿ ಬೆಳೆಗಳಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 15 ನವೆಂಬರ್ 2024.
  • ಮಳೆ ಆಶ್ರಿತ ಜೋಳ ಮತ್ತು ಮುಸಿಕಿನ ಜೋಳ ಬೆಳೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ 30 ನವೆಂಬರ್ 2024.
  • ನೀರಾವರಿ ಆಶ್ರಿತ ಗೋಧಿ ಬೆಳೆಗಳಿಗೆ ಅರ್ಜಿ ಸಲ್ಲಿಸಲು 16 ಡಿಸೆಂಬರ್ 2024.
  • ಕಡಲೆ ಮತ್ತು ನೆಲಗಡಲೆ (ಬೇಸಿಗೆ) ಬೆಳೆಗಳಿಗೆ ಅರ್ಜಿ ಸಲ್ಲಿಸಲು 31 ಡಿಸೆಂಬರ್ 2024.

ಈ ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ತಾಲ್ಲೂಕುಗಳಲ್ಲಿ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ರೈತರು ಇವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ವಿಮಾ ಕಂಪನಿಯ ಸಂಪರ್ಕ ವಿವರಗಳು:

  • ಧಾರವಾಡ: ಸ್ಮಿತಾ ಸಿ. ಡಿ. (7019969942)
  • ಅಣ್ಣಿಗೇರಿ: ರಾಜಾಭಕ್ಷಿ ದೊಡ್ಡಮನಿ (6362123480)
  • ಹುಬ್ಬಳ್ಳಿ: ಬಿರೇಶ ವಡ್ಡರ (7975191577)
  • ನವಲಗುಂದ: ಅಭೀಕ ಕ್ಯಾಡದ (6361364459)

ರೈತರು ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೃಷಿ ಇಲಾಖೆ, ಹಾಲಿ ಸೇವಾ ಸಹಕಾರಿ ಬ್ಯಾಂಕುಗಳನ್ನು ಸಂಪರ್ಕಿಸಬಹುದು.

Sharath Kumar M

Spread the love

Leave a Reply

Your email address will not be published. Required fields are marked *

rtgh